Tuesday 4 August 2015

ಪ್ರೀತಿ ಅಲ್ಪಾಯುಷಿ

ಅವನ ಕೊಳಲ ದನಿಯಂತಿದ್ದವಳು
ಅದೇಕೆ ಬಿಮ್ಮನೆ ಮುನಿಸಿಕೊಂಡಳು

ನದಿಯ ನೀರಿನ ಕಣವೊಂದು
ನಭದಿಂದ ಸುರಿವ ಮಳೆ ಹನಿಯೊಂದು
ಸೂರ್ಯನ ರಶ್ಮಿಯ ಕಿರಣವೊಂದು
ನಮ್ಮದಲ್ಲವೆಂದು ಒತ್ತೊತ್ತಿಹೇಳಿ
ಸೂಚಿಸಿದನೇ ಅವನು ತನ್ನ ಪ್ರೀತಿ
ನಿನ್ನೊಬ್ಬಳಿಗಲ್ಲವೆಂದು?

ಮುನಿಸಿಕೊಂಡರೂ ಮುದ್ದುಗರೆಯದೆ
ಸರಸಕ್ಕೂ ಸನಿಹ ಸರಿಯದೆ
ಕೊಳಲನೂದಿ ಕರುವ ಕರೆದ ಗೊಲ್ಲ
ಹೇಳದೆಯೆ ಹೇಳಿದನೆ
ಕಾದಿರುವಳು ಭಾಮೆ ನಿನ್ನಂತೆ ಎಂದು?

ಅವನ ತೊಯ್ದ ತುಂಗೆ ಅವಳತ್ತ ಹರಿಯಲಿಲ್ಲ
ಸೋಕಲಿಲ್ಲ ಅವನುಸಿರು ಅವಳ ಗಲ್ಲ
ನಡುವೆ ಸಂಭಾಷಣೆಯಿಲ್ಲ ಮೌನವೇ ಎಲ್ಲ
ಇದರರ್ಥವೇನು ಮಾಧವ

ಮೌನ ಪ್ರಿಯವೆಂದೋ ಇಲ್ಲ ರಾಧೆ ಅಪ್ರಿಯವೆಂದೋ??


 ಕವನದ ರಾಧೆ, ಕೃಷ್ಣ, ಭಾಮೆಯರು ಆಧುನಿಕ ಒಲವಿನ ಒದ್ದಾಟಕ್ಕೆ ಸಿಕ್ಕ ಪ್ರತಿಮೆಗಳಷ್ಟೆ...

No comments:

Post a Comment