Tuesday 17 November 2015

ಹೇಳು ಯಾರು ಯಾರಿಗೆ


ಜೀವ ಭಾವ ಮಿಡಿವ ದೇವ ಹೇಳು ಯಾರು ಯಾರಿಗೆ
ಭುವಿಯ ಒಡಲ ಒಡೆದು ತೆಗೆದ ಚಿನ್ನ ಯಾರ ಕೊರಳಿಗೆ
ತುಂಡು ನಗುವ ತೋರೊ ಮೊಗವ ಹೊರುವುದಾರ ನಗುವಿಗೆ
ತುಂಡು ಮೋಡ ತುಸುವೆ ಅಳುವುದೇಕೆ ಯಾರ ಅಗಲಿಕೆ

ಬಡ್ಡು ಕತ್ತಿ ಮಸೆವುದೇಕೆ ಯಾರು ಇಂದು ಗಲ್ಲಿಗೆ
ದಾರ ನೆಂದು ನಗುವುದೇಕೆ ಯಾರ ಮುಡಿಗೆ ಮಲ್ಲಿಗೆ
ಅತ್ತ ಕಣ್ಣ ನೀರಿನಲ್ಲಿ ಎಷ್ಟು ಪಾಲು ನೆನಪಿಗೆ
ಸತ್ತು ಮಣ್ಣು ಸೇರುವಾಗ ಎಷ್ಟು ಅಂಗ ಪರರಿಗೆ

ನೂರು ಕೋಟಿ ಜೀವದಲ್ಲಿ ಎಷ್ಟು ಅರ್ಥ ಬಾಳಿಗೆ
ಯಾವ ಪದದ ಅರ್ಥ ಯಾರು ಬರೆದು ಕೊಟ್ಟರಾರಿಗೆ
ಲೆಕ್ಕವಿಟ್ಟರೆಷ್ಟು ದಿನಕೆ ಮೂಳೆ ದೊಗಲ ಬಾಡಿಗೆ
ಕಾಮ ಕ್ರೋಧವೆಲ್ಲ ಮೊಟ್ಟೆ ಇಟ್ಟ ಪುಟ್ಟ ಗೂಡಿಗೆ

ಬಡ್ಡು ಕತ್ತಿ- ಹರಿತವಿಲ್ಲದ ಕತ್ತಿ

Thanks and Regards,

Bhavya