Friday 27 September 2013

ಕಂಬನಿ

                                


          ತಟ್ಟನೆ ಕಣ್ಣ ಹನಿಯೊಂದು ಹೊರಳಿ
ದಿಂಬಿನಂತರಾಳವನು ಮುತ್ತಿಕ್ಕಿತು.
ಮತ್ತಿನಿತೂ ಯೋಚಿಸದೆ ಮರುಗಿ ಮರಳಿ
ಕಣ್ಣ ಕೊಳದಾಚೆಗೆ ಸಂಚರಿಸಿತು.


           ನಿನ್ನ ಋಣವಿದ್ದಿತೇನೋ ಈ ನೀರ ಹನಿಗೆ
ಕಾದಿತ್ತು ನೀ ಎನ್ನ ಅಳಿಸುವ ವರೆಗೆ
ತಲೆಯಿಟ್ಟು ಒರಗಲು ದಿಂಬಿನಾ ಎದೆಗೆ
ಕಾದಿತ್ತು ಕಣ್ಣೀರು ಹೊರಡಲು ಹೊರಗೆ


           ಕಣ್ಣಗಲಿದ ಹನಿಯು ಮರಳಿ ಎಂದು ಬರದು
ಎಂದು ನೆಲದಲಿದ್ದ ಬಿಂದುವೋ ಅದು
ಮರಳಿದೆ ಮತ್ತೆ ಮಣ್ಣ ಕುಲಕ್ಕಿಂದು
ಕಣ್ಣೀರು ಕರಗಿತು ಉಳಿದುದು ಕಲೆಯ ಬಿಂದು

No comments:

Post a Comment